ರೈತರ ಆತ್ಮಹತ್ಯೆಗೆ ಕೊನೆಯೆಂದು..?

 ರೈತರ ಆತ್ಮಹತ್ಯೆಗೆ ಕೊನೆಯೆಂದು..?

ಮಾಡಿಲ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಸಾಕಷ್ಟು ರೈತರನ್ನು ನಾವು ನೋಡಿದ್ದೇವೆ ಇದು ಪ್ರಬುತ್ವಕ್ಕೆ ನಾಚಿಕೆಗೇಡಿನ ಸಂಗತಿ. ಯಾವುದೇ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಯಾವೊಬ್ಬ ರೈತನೂ ಆತ್ಮಹತ್ಮೆ ಮಾಡಿಕೊಳ್ಳ ಬಾರದು. ರೈತ ತನಗಾಗಿ ಮಾತ್ರ ಉಳುಮೆ ಮಾಡಿ ಅನ್ನ ನೀಡುವುದಿಲ್ಲ ಇಡಿ ದೇಶಕ್ಕೆ ಅನ್ನ ನೀಡುತ್ತಾನೆ. ಇಂತ ರೈತ ಆತ್ಮಹತ್ಯೆ ಮಾಡಿಕೊಳ್ಳುವುದೆಂದರೆ ಏನರ್ಥ..?
ನಿನ್ನೆಯ ವಾರ್ತಾ ಭಾರತಿ ದಿನ ಪತ್ರಿಕೆಯನ್ನು ಕೈಗೆತ್ತಿಕೊಂಡಾಕ್ಷಣ ಮುಖ ಪುಟದ ದಪ್ಪಕ್ಷರದಲ್ಲಿ ಬರೆದ ಹೆಡ್ ಲೈನ್ ನನಗೆ ತುಂಬಾ ಬೇಸರ ತರಿಸಿತು ಒಂದು ಕ್ಷಣ ಯೋಚಿಸಿದೆ. ಪ್ರಜಾ ಪ್ರಭುತ್ವ ಎಂದರೆ ಇದೆನಾ... ಯಾವುದೇ ಒಂದು ಕಾಯಿದೆ ಅಥವಾ ಕಾನೂನು ಸರ್ಕಾರ ಜಾರಿಗೊಳಿಸುತಿದೆ ಎಂದರೆ ಅದರಿಂದ ಪ್ರಜೆಗಳಿಗೆ ಏನಾದ್ರೂ ಉಪಯುಕ್ತವಾಗ ಬೇಕು.. ಅದನ್ನು ಕುರಿತು ಜನರಲ್ಲಿ ಅರಿವು ಮೂಡಿಸಿ ಜಾರಿಗೆ ತರುವುದು ಪ್ರಜಾ ಪ್ರಭುತ್ವದ ಲಕ್ಷಣ.. ಒಂದು ವೇಳೆ ಸರ್ಕಾರ ಮಾಡುವ ಕಾನೂನನ್ನು ಜನತೆ ವಿರೋಧಿಸಿದರೆ ಅದನ್ನು ಕೋಡಲೇ ಕೈ ಬಿಡಬೇಕು ಈ ರೀತಿ ಮಾಡಿದಲ್ಲಿ ಪ್ರಜಾ ಪ್ರಭುತ್ವದ ಮೌಲ್ಯಗಳು ಉಳಿಯಲಿಕ್ಕೆ ಸಾಧ್ಯ..
ತಿಂಗಳುಗಟ್ಟಲೇ ರೈತ ವಿರೋಧಿ ಕಾನೂನುಗಳ ವಿರುದ್ಧ ಪ್ರತಿಭಟನೆ ಮಾಡುತಿದ್ದರೂ ಸರ್ಕಾರ ರೈತರ ಕೂಗನ್ನು ಧಿಕ್ಕರಿಸುತ್ತಲೇ ಇದೆ... ಸಮಾಧಾನಕ್ಕಾಗಿ

ಪದೇ ಪದೇ ಸಂಧಾನಕ್ಕೆAದು ಕರೆಯುವುದು ನಾಟಕೀಯ ರೀತಿಯಾಗಿದೆ. ದಪ್ಪ ಚರ್ಮ ಹೊಂದಿದ ಬಂಡು ರಾಜಕಾರಣವನ್ನು ಸಹಿಸದೇ ರೈತ ದೆಹಲಿ ಹೋರಾಟದಲ್ಲಿ ಪಾಲ್ಗೊಂಡ  ರೈತರ ಬಾಪೂ ಎಂದೇ ಜನಪ್ರಿಯರಾಗಿದ್ದ ಕಶ್ಮೀರ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವುದು ಶೋಚನೀಯ.  ಇವರ ಸಾವು ರೈತ ಹೋರಾಟಕ್ಕೆ ಇನ್ನಷ್ಟು  ಕಿಚ್ಚು ಹಚ್ಚುವಂಥದ್ದು, ದೇಶದ ರೈತರ ಹಿತಕ್ಕಾಗಿ ಪ್ರಾಣ ಅರ್ಪಿಸಿದ ಇವರಿಗೆ ಭಾವಪೂರ್ವಕ ನಮನಗಳು ಮನುಷ್ಯತ್ವ ಮರೆತು ರಾಜಕೀಯ ಮಾಡುವ ರಾಜಕಾರಣಿಗಳಿಗೆ ಧಿಕ್ಕಾರ...ಕಶ್ಮೀರ್ ಸಿಂಗ್ ಅವರ ಸಾವಿಗೆ ನೀವು ಏನು ನ್ಯಾಯ ಕೊಡುತ್ತೀರೀ..? ಹೆಚ್ಚೆಂದರೆ ಅವರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಕೊಟ್ಟು ಬೇಷ್ ಅನಿಸಿಕೊಳ್ಳಲು ಅವರ ಊರಿನಲ್ಲಿ ಒಂದು ಮೂರ್ತಿಯನ್ನ ಮಾಡಬಹುದು ಅದು ಬಿಟ್ಟರೇ ನಿಮ್ಮ ಕೈಯಲ್ಲಿ ಏನನ್ನು ಮಾಡಲಾಗುವುದಿಲ್ಲ...

       ನಾವು ಎಷ್ಟು ದಿನಗಳವರೆಗೆ ಈ ಚಳಿಯಲ್ಲಿ ಕುಳಿತು ಕೊಳ್ಳಬೇಕು..? ಈ ಸರ್ಕಾರ ನಮ್ಮ ಅಹವಾಲನ್ನು ಎಂದಿಗೂ ಆಲಿಸದೂ. ಸಮಸ್ಯೆಗೆ ಏನಾದರೂ  ಪರಿಹಾರ ದೊರೆಯ ಬಹುದು ಎನ್ನುವ ಉದ್ದೇಶದಿಂದ ನಾನು ಪ್ರಾಣ ತ್ಯಾಗ ಮಾಡುತಿದ್ದೇನೆ.  
ಕಶ್ಮೀರ್ ಸಿಂಗ್ ಅವರ ಡೆತ್ ನೋಟ್ ನಲ್ಲಿ ಬರೆದ ಉದ್ದೇಶವನ್ನು ಅರಿತು ನೀವು ಕೂಡಲೇ..ರೈತ ವಿರೋಧಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಿ ... ಕೊನೆ ಪಕ್ಷದಲ್ಲಿ ಹುತಾತ್ಮ ರೈತನಿಗೆ ನೀವು ಸಲ್ಲಿಸುವ ಶ್ರದ್ಧಾಂಜಲಿ ಎಂತಾದರೂ ಸರಿಯೇ ಇನ್ನಷ್ಟು ರೈತರನ್ನು ಬಲಿ ತೆಗೆದುಕೊಳ್ಳಬೇಡಿ..;

                                             ಮಾಳಿಂಗರಾಯ.ಕೆAಭಾವಿ

Comments

Popular posts from this blog

ಕಥಾ ಸಂವಿಧಾನ

ಹುಟ್ಟು ಮತ್ತು ಸಾವುಗಳ ನಡುವೆ...