Posts

Showing posts with the label ಕೆಂಡಸಂಪಿಗೆ

ದೇಶವೆಂದರೆ

ದೇಶವೆಂದರೆ ಗಡಿಯಲ್ಲ  ಮಣ್ಣಲ್ಲ ಧರ್ಮವಲ್ಲ ದೇವರಲ್ಲ ತಿರಂಗ ದ್ವಜವಲ್ಲ…. ದೇಶವೆಂದರೆ… ಬಿಸಿಲು, ಗಾಳಿ, ಮಳೆಯನ್ನದೇ  ಅನ್ನ ಬೆಳೆವ  ಇಟ್ಟಿಗೆ ವೊತ್ತು ಕಟ್ಟಡ ಕಟ್ಟುವ  ಬೀದಿಯಲಿ ಕಸಗೂಡಿಸಿ  ಶುಚಿ ಕಾಪಾಡುವ  ಆಧುನಿಕತೆಯಲ್ಲೂ  ಮಲಬಾಚುವ  ಜೀವದಂಗು ತೊರೆದು  ನಮ್ಮನ್ನು ರಕ್ಷಿಸುವ… ಶ್ರಮಜೀವಿಗಳು    ಈ ದೇಶ… ದೇಶವೆಂದರೆ  ಸಂವಿಧಾನ….. ದೇಶವೆಂದರೆ ನಾನು…. ದೇಶವೆಂದರೆ ನೀನು…. ದೇಶವೆಂದರೆ ನಾವೆಲ್ಲರೂ…. - ಎಂ.ಕೆ.ಕೆಂಭಾವಿ