ಮೀಸಲಾತಿಯ ಹರಿಕಾರ ಶಾಹು ಮಹಾರಾಜ …
ಚತ್ರಪತಿ ಶಾಹು ಮಹಾರಾಜ ಹುಟ್ಟಿದ್ದು ಜೂನ್ 26 1874 ರಂದು ಶಾಹುರವರ ಮೊದಲ ಹೆಸರು ಯಶವಂತರಾವ್ ಘಟ್ಲೆ ಅವರ ತಂದೆಯ ಹೆಸರು ಜಯಸಿಂಹರಾವ್ ಘಟ್ಲೆ ತಾಯಿ ರಾಧಾಬಾಯಿ ಇವರು ಮೂಲತಃ ಕೊಲ್ಲಾಪುರದವರು. ರಾಣಿ ಆನಂಧಿಬಾಯಿಯವರು ಮಾರ್ಚ್ 11  1884 ರಂದು ಶಾಹುರನ್ನು ದತ್ತು ತೆಗೆದುಕೊಂಡರು.
ಶಾಹುರವರಿಗೆ 1894ರಂದು ಮಹಾರಾಜರಾಗಿ ಪಟ್ಟಾಭಿಷೇಕವಾಗುತ್ತದೆ. ಕ್ರಿ.ಶ 1900ರಲ್ಲಿ ಒಂದು ಘಟನೆ ನಡಿಯುತ್ತದೆ. ರಾಜನಾದವನು ಗಂಗಾ ಘಾಟ್ ಎಂಬಲ್ಲಿ ಸ್ನಾನ ಮಾಡಬೇಕಾಗಿರುತ್ತದೆ. ಆ ಸಂದರ್ಭದಲ್ಲಿ ರಾಜನಿಗೆ ಬ್ರಾಹ್ಮಣರು ಮಂತ್ರಗಳನ್ನು ಪಟಿಸಬೇಕಾಗಿರುತ್ತದೆ. ಆದರೆ ಬ್ರಾಹ್ಮಣರು ರಾಜನಿಗೆ ಪಟಿಸಬೇಕಾದ  ಮಂತ್ರಗಳನ್ನು ಹೇಳುವುದಿಲ್ಲ ಬದಲಾಗಿ ಶೂದ್ರರ ಮಂತ್ರಗಳನ್ನು ಹೆಳುತ್ತಾರೆ. ಇದನ್ನರಿತ ರಾಜರ  ಆಪ್ತರೊಬ್ಬರು ರಾಜರಿಗೆ ಈ ವಿಚಾರವನ್ನು ತಿಳಿಸುತ್ತಾರ. ಕೂಡಲೇ ಶಾಹು ಮಹಾರಾಜರು ಪುರೋಹಿತರನ್ನು ಪ್ರಶ್ನಿಸುತ್ತಾರೆ. ಅದಕ್ಕೆ ಪುರೋಹಿತರು ಹೇಳುತ್ತಾರೆ ನೀವು ಶೂದ್ರರಾಗಿರುವುದರಿಂದ ಶೂದ್ರ ಮಂತ್ರಗಳನ್ನೆ ಹೇಳಬೇಕಾಗುತ್ತದೆ. ಎಂದು ಬಹಳ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಾರೆ. ಆಗ ಶಾಹು ಮಹಾರಾಜರು ಒಬ್ಬ ಮಹಾರಾಜನಾಗಿರುವ ನನಗೆ ಬ್ರಾಹ್ಮಣರಿಂದ ಶೋಷಣೆಯಾಗುತಿದೆ ಇನ್ನು ಸಾಮಾನ್ಯ ಜನರಿಗೆ ಇವರಿಂದ  ಇನ್ನೆಷ್ಟು ಶೋಷಣೆಯಾಗುತ್ತಿರ ಬಹುದು ಎಂದು ಮನದಲ್ಲೇ ಮರುಕ ಪಡುತ್ತಾರೆ.
ಬ್ರಾಹ್ಮಣಶಾಹಿಗಳಿಂದ  ಅಪಮಾನ, ಅವಮಾನಗಳಿಂದ ತುತ್ತಾದ ದಲಿತರು, ಶೋಷಿತರು ಹಾಗೂ ಸಾಮಾನ್ಯ ಜನರಿಗೆ ಸಮಾನತೆ ದೊರೆಕಿಸಿಕೊಡುವ ನಿಟ್ಟಿನಲ್ಲಿ ಯೋಚನೆ ಮಾಡುತಿರುತ್ತಾರೆ.  ಅದೇ ಸಮಯದಲ್ಲಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಶಾಹುಮಹಾರಾಜರು ಲಂಡನ್ನಗೆ ಹೋಗುತ್ತಾರೆ  ಅಲ್ಲಿ ತಾವು ಅನುಭವಿಸಿದ ಕೆಲವು ಘಟನೆಗಳು ನೆನಪಿಗೆ ಬರುತ್ತವೆ. ಅದಕ್ಕೆ ಅವರು ಒಂದು ಮಹತ್ತರವಾದ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದೇನೆಂದರೆ ಶೂದ್ರರಿಗೆ  50% ಮೀಸಲಾತಿ  ಕೊಡಬೇಕೆಂದು ಭಾರತದ  ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮೀಸಲಾತಿಯನ್ನು ಆರಂಭಿಸಿದ ಕೀರ್ತಿ ಛತ್ರಪತಿ ಶಾಹು ಮಹಾರಾಜರಿಗೆ ಸಲ್ಲುತ್ತದೆ.  ಶಾಹು ಮಹಾರಾಜರ ಮೀಸಲಾತಿಯ ವಿಷಯವನ್ನು ಕೇಳಿದ ಬ್ರಾಹ್ಮಣಶಾಹಿಗಳಿಗೆ ಒಂದುರೀತಿಯಲ್ಲಿ ನಡುಕ ಉಂಟಾಗುತ್ತದೆ. ಶಾಹು ಮಹಾರಾಜರ ಮೀಸಲಾತಿ ಯೋಜನೆಯನ್ನು ಬಾಲಗಂಗಾಧರ ತಿಲಕರು ಒಪ್ಪುವುದಿಲ್ಲ.  ಬ್ರಾಹ್ಮಣಶಾಹಿಗಳಂತೂ ಸಂಪೂರ್ಣವಾಗಿ ವಿರೋಧಿಸುತ್ತಾರೆ.  ಮಹಾ ರಾಜರ ಮೇಲೆ ಹಲ್ಲೆ ಮಾಡುತ್ತಾರೆ ಒಂದು ದಿನ ಶಾಹು ಮಹಾರಾಜರು ಪ್ರಯಾಣಿಸುತಿದ್ದ ರೈಲಿಗೆ ಬಾಂಬನ್ನು ಸಹ ಇಡಲಾಗುತ್ತದೆ ಆ ಕೊಲೆ ಪ್ರಯತ್ನ ವಿಫಲವಾಗುತ್ತದೆ.
ಇಲ್ಲಿಗೆ ಮೀಸಲಾತಿ ಪದ್ದತಿಗೆ ನೂರಕ್ಕಿಂತಲೂ ಅಧಿಕ ವರ್ಷದ ಹೆಜ್ಜೆ ಗುರುತುಗಳಿವೆ. ಇನ್ನು ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿರುವ ದಲಿತರು, ಅಸ್ಪ್ರೃಶ್ಯರು, ಬಡವರು ಹಿಂದುಳಿದವರು ಎಲ್ಲರೂ ಆರ್ಥಿಕವಾಗಿ, ಸಾಮಾಜಿಕ , ರಾಜಕೀಯದಲ್ಲಿ ಎಲ್ಲರೂ ಸಮಾನತೆ ಸಾಧಿಸುವ ವರೆಗೂ ಮೀಸಲಾತಿ ಪದ್ಧತಿ ಮುಂದುವರೆಯ ಬೇಕು. ಶಾಹು ಮಹಾರಾಜ ಕನಸು, ಡಾ.ಬಿಆರ್ ಅಂಬೇಡ್ಕರ್ ರವರ ಕನಸು ಜ್ಯೋತಿ ಬಾ ಫುಲೆ ಸವಿತ್ರಿ ಬಾ ಫುಲೆ ಇನ್ನು ಮುಂತಾ ಬಹುಜನ ನಾಯಕರ ಕನಸು ನನಸು ಮಾಡುವುದು  ನಮ್ಮೆಲ್ಲರ ಕರ್ತವ್ಯವಾಗಿದೆ.                                                             
           
                         ಮಾಳಿಂಗರಾಯ.ಕೆಂಭಾವಿ

Comments

Post a Comment

Popular posts from this blog

ಕಥಾ ಸಂವಿಧಾನ

ಹುಟ್ಟು ಮತ್ತು ಸಾವುಗಳ ನಡುವೆ...