ದೀಪಾರತಿ
ದೀಪಾರತಿ.... ಕವನ ಸಂಕಲನ- ನಿತ್ಯೋತ್ಸವ. ------------------------------------------- ನೀನುರಿಸಿದ ಹೊಂಬೆಳಕಿನ ಕಿಡಿ ಅರಳಿದೆ ಇಲ್ಲಿ, ಕುಡಿ ಚಾಚಿದೆ ಇಲ್ಲಿ. ನೀ ಸುರಿಸಿದ ರಸ ತೈಲದ ಗುಡಿ ಹಾರಿದೆ ಇಲ್ಲಿ; ಗುಡಿ ಮೀರಿದೆ ಇಲ್ಲಿ. ನೀ ಬಿತ್ತಿದ ದಯೆ ಹಬ್ಬಿದೆ ಮನು ಸಂತತಿಯಲ್ಲಿ, ಜನ ಸಮ್ಮತಿಯಲ್ಲಿ; ನೀನೆತ್ತಿದ ತನು ಸಾಗಿದೆ ಭಾವೋನ್ನತಿಯಲ್ಲಿ, ನವ ಸದ್ಗತಿಯಲ್ಲಿ. ನಿನ್ನದೆ ನೆಲೆ, ನಿನ್ನದೆ ಮನೆ; ನಿನ್ನೆದೆಯೊ ಉದಾರ; ನಾನೂಳಿಗಕಿರುವಲ್ಪನು- ನೀ ವಾರಸುದಾರ. ಬೆಳೆಬೆಳೆಯಲಿ ನಿನ್ನದೆ ಘನ ಮಹಿಮಾಂಕುರ ಒಳಗೆ; ಬೆಳಬೆಳಗಲಿ ಬಿರುದಾವಳಿ, ನಾಮಾಂಕಿತ ಹಲಗೆ. -ಕೆ ಎಸ್ ನಿಸಾರ್ ಅಹಮದ್.